ತಂಗಿ ಹುಟ್ಟಿದಳು

ಸಂಭ್ರಮವಿಲ್ಲ, ಸಡಗರವಿಲ್ಲ
ಮನೆಯೊಳಗೆ ಸೂತಕದ ವಾತಾವರಣ

ಆಶೆಯಂತೆಯೆ
ಬತ್ತಿ ಹೋಗಿದೆ ಎದೆ ಹಾಲು
ಹಡೆದವ್ವ ಕೊರಗುವಳು

ಜೋಲಿ ಏರಿಸಲು
ಮೊಳೆಯೆ ಸಿಗಲೊಲ್ಲದು
ಅಪ್ಪ ಗೊಣಗುವನು

ಪೇಟೆಯಲ್ಲಿ ಮಿಠಾಯಿ
ಇದ್ದಕ್ಕಿದ್ದ ಹಾಗೆಯೆ ತುಟ್ಟಿಯಾಗಿದೆ
ಚಂದ ಮಾಡಿ ಪದ ಹಾಡುವ
ಅಜ್ಜಿಯ ಗಂಟಲೂ ಕಟ್ಟಿ ಹೋಗಿದೆ

ದೂರದಿಂದಲೇ ಶುಭ ಕೋರಿದ್ದಾರೆ
ಬಂಧುಗಳು
ಯಾರೊಬ್ಬರೂ ಸೂಚಿಸಿಲ್ಲ
ಮಗುವಿಗೆ ಹೆಸರು

ಹೋಗಲಿ ಬಿಡಿ…
ಯಾರೋ ಸಮಾಧಾನ ಮಾಡುವರು
‘ಸಾಕಮ್ಮ’ ‘ಸಾಕು’ ಸಾಕು…
ನಿಟ್ಟುಸಿರೇ ಹೆಸರಾಗಿ
ಮಗುವನು ಅಲಂಕರಿಸುವುದು

ನಿರಾಶೆ, ನಿರ್ಲಕ್ಷ್ಯ
ಹಸುಕಂದನಿಗೆ ಹೇಗೆ ಅರ್ಥವಾಗುವುದು?
ನುಣ್ಣನೆಯ ಸಣ್ಣ ದನಿ ಜಡ ಜಗತ್ತ ಭೇದಿಸುವುದು

ಹಿಡಿಯಷ್ಟಿರುವ ತಂಗಿಯನು
ಮುಡಿಯಷ್ಟಿರುವ ಅಕ್ಕ
ಅಕ್ಕರೆಯಿಂದ ಅಪ್ಪುವಳು
ಅಭಯ ನೀಡುವಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಸ್ಸಂಜೆಯ ಮಿಂಚು – ೨೩
Next post ನಿಜ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys